Monday, 20 July 2020

ಕವನ

           ನೀ  ಅರಿತರೆ.......

ಚಿಪ್ಪೊಂದು ಹರಡಿದೆ ಬಯಸಿ
ಮುತ್ತಾಗಲು ಸ್ವಾತಿ ಮಳೆ ಸುರಿದರೆ
ಹೂವೊಂದು ಅರಳಿದೆ ಬಯಸಿ
ಹಣ್ಣಾಗಲು ದುಂಬಿ ಜೇನಸವಿದರೆ....

ತೇಲಿ ಬರುವ ನಗೆಯ ಹೊನಲು
ತಂಪೆರೆಯುತಿದೆ ಅಳಿಸಿ ಸುಡುಬಿಸಿಲು
ನಿನಗೊಪ್ಪಿತವೆ ತಣಿದು ತಣಿದು ದನಿದರೆ.....

ಹಾಲೊಳಗಿನ ಕೆನೆಯಂತೆ
ನನ್ನೊಳಗೆ  ನೀನು ನಿಂತೆ
ಕಲಕದೆ ನೀ ಕಾಣುವೆ ಹೇಗೆ ತಡೆದರೆ....

ಕನಸಿನಾ ಬಣ್ಣಗಳ ಕಲಿತು
ಬರೆಯುತಿವೆ ನಿನ್ನಯಾ ಗುರುತು
ಮೂಡದಿರೆ ಹೇಗೆ ನನ್ನೊಲುಮೆ ನಿಜವೇ ಆದರೆ...

ಕಾಡೊಳು ಅರಳಿ ಅಳಿದ ಹೂವಂತೆ
ಕಡಲಿನಿಂದೊದ್ಬವಿತ ಮೊಡ ಅಲ್ಲೆ ಸುರಿದಂತೆ
ಯಾವ ಛಲ ಏನು ಫಲ ನೀ ಆಗದಿರೆ ಸೆರೆ...

# ಮೃತ್ಯುಂಜಯ. ಹಿರೇಮಠ 



No comments:

Post a Comment

ಘಟಕ ಯೋಜನೆ